Saturday, August 8, 2020

ಕೂಗಿದರು ಧ್ವನಿ ಕೇಳದೆ - ವಿಜಯ ದಾಸರು

 ಕೂಗಿದರು  ಧ್ವನಿ  ಕೇಳದೆ  

ಶಿರಾ  ಬಾಗಿದರು  ದಯ  ಬಾರದೆ  |ಪಲ್ಲವಿ |

ಭೋಗಿಶಯನ ಭುವನಾಧಿಪತೇ  ನಿನ್ನ  ಆಗಮನವೆಂದಿಗೆ  ಆಗುವುದೋ  ಪ್ರಭು  |ಅನು ಪಲ್ಲವಿ|


ಭಕ್ತರಿಗೊಲಿದವ  ನೀನು  ಖರೆ ಎನ್ನತ್ತ  ನೋಡುವದು ನೀನು ದೊರೆ 

ಚಿತ್ತವಧಾನ  ಪರಾಕು  ಮಹಾ  ಪ್ರಭು  ಎತ್ತಣ  ರಥವನು  ಎತ್ತಿ  ಬಾ ನೋಡು ದೊರೆ |ಚ೧ | 


ಸಿಂಧು  ಶಯನ  ಶೇಷಾದ್ರಿವರ  ಸಿರಿ  ಮಂದಿರ  ಭಕ್ತ  ಕುಟುಂಬಧರ: 

ಸುಂದರ  ಮೂರುತಿ  ಒಂದಿನ  ಸ್ವಪ್ನದಿ  ಬಂದು  ಪಾದದ್ವಯ  ಚಂದದಿ ತೋರಿಸೋ |ಚ೨ | 


ಕರುಣಾಶರಧಿ  ನೀನಲ್ಲವೇ  ಕೃಷ್ಣ....ಶರಣಾಗತರಿಗೆ  ದೊರೆಯಲ್ಲವೇ ಕೃಷ್ಣ

ಮೊರೆಹೊಕ್ಕವರಿಗೆ  ಮರೆಯಾಗುವರೇ  ಸರಿಯೇ  ಜಗದೊಳು ಕೃಷ್ಣಾ ವಿಜಯವಿಠ್ಠಲರೆಯ |ಚ೩  |  


ರಚನೆ : ವಿಜಯ ವಿಠ್ಠಲ ದಾಸ 



kUgidaru dhvani kELade shira bAgidaru daya bArade