ಕೂಗಿದರು ಧ್ವನಿ ಕೇಳದೆ
ಶಿರಾ ಬಾಗಿದರು ದಯ ಬಾರದೆ |ಪಲ್ಲವಿ |
ಭೋಗಿಶಯನ ಭುವನಾಧಿಪತೇ ನಿನ್ನ ಆಗಮನವೆಂದಿಗೆ ಆಗುವುದೋ ಪ್ರಭು |ಅನು ಪಲ್ಲವಿ|
ಭಕ್ತರಿಗೊಲಿದವ ನೀನು ಖರೆ ಎನ್ನತ್ತ ನೋಡುವದು ನೀನು ದೊರೆ
ಚಿತ್ತವಧಾನ ಪರಾಕು ಮಹಾ ಪ್ರಭು ಎತ್ತಣ ರಥವನು ಎತ್ತಿ ಬಾ ನೋಡು ದೊರೆ |ಚ೧ |
ಸಿಂಧು ಶಯನ ಶೇಷಾದ್ರಿವರ ಸಿರಿ ಮಂದಿರ ಭಕ್ತ ಕುಟುಂಬಧರ:
ಸುಂದರ ಮೂರುತಿ ಒಂದಿನ ಸ್ವಪ್ನದಿ ಬಂದು ಪಾದದ್ವಯ ಚಂದದಿ ತೋರಿಸೋ |ಚ೨ |
ಕರುಣಾಶರಧಿ ನೀನಲ್ಲವೇ ಕೃಷ್ಣ....ಶರಣಾಗತರಿಗೆ ದೊರೆಯಲ್ಲವೇ ಕೃಷ್ಣ
ಮೊರೆಹೊಕ್ಕವರಿಗೆ ಮರೆಯಾಗುವರೇ ಸರಿಯೇ ಜಗದೊಳು ಕೃಷ್ಣಾ ವಿಜಯವಿಠ್ಠಲರೆಯ |ಚ೩ |
ರಚನೆ : ವಿಜಯ ವಿಠ್ಠಲ ದಾಸ
kUgidaru dhvani kELade shira bAgidaru daya bArade
